ಕಡಬ : ಜಮೀನಿನ ಕಳೆ ತೆಗೆಯುವ ವಿಚಾರದಲ್ಲಿ ತಕರಾರು ಉಂಟಾಗಿ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುತ್ತಾರೆ ಎಂದು ಆರೋಪಿಸಿ ಮಹಿಳೆಯೋರ್ವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು ಚಂಡೆಹಿತ್ಲು ನಿವಾಸಿ ಮಹಿಳೆ ತನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು, ಫೆ.9 ರಂದು ಬೆಳಗ್ಗೆ ತನ್ನ ಜಮೀನಿನಲ್ಲಿರುವಾಗ, ಮಹಿಳೆ ಹಾಗೂ ಪಕ್ಕದ ಜಮೀನಿನ ಸಂತೋಷ ಎಂಬಾತನಿಗೆ ಜಮೀನಿನಲ್ಲಿ ಕಳೆ ತೆಗೆಯುವ ವಿಚಾರದಲ್ಲಿ ತಕರಾರು ಉಂಟಾಗಿರುತ್ತದೆ.
ಸದ್ರಿ ಘಟನೆ ಮುಂದುವರಿದಂತೆ ಬಳಿಕ ಮಹಿಳೆ ಮನೆಯಲ್ಲಿದ್ದಾಗ, ಸಂತೋಷ್ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ, ಬಳಿಕ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ:22-2024. ಕಲಂ:447,323.504.506 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.