ಪುತ್ತೂರು : ಕೊರೊನಾ, ಡೆಂಗ್ಯೂ, ಮಲೇರಿಯಾ ಸಾಂಕ್ರಾಮಿಕ ರೋಗಗಳ ಬಗ್ಗೆ ಕೃಷ್ಣನಗರ ಶಾಲೆಯಲ್ಲಿ ಮೇ.28 ರಂದು ಸಭೆ ನಡೆಯಿತು. ಈ ಸಭೆಯಲ್ಲಿ ಕೊರೊನಾ, ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಮುಂಜಾಗ್ರತೆ ಕ್ರಮಗಳ ಬಗೆಗಿನ ಮಾಹಿತಿಯನ್ನು ನೀಡಲಾಯಿತು.
ನಗರಸಭೆಯ ಪೌರಯುಕ್ತರಾದ ಮಧು. ಎಸ್, ಪರಿಸರ ಅಭಿಯಾಂತರಾದ ಶಬರಿನಾಥ ರೈ, ನಗರಸಭೆಯ ಸದಸ್ಯೆ ಲೀಲಾವತಿ ಕೃಷ್ಣನಗರ ಇವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಆಶಾ ಕಾರ್ಯಕರ್ತೆ ತುಳಸಿ ವಾರ್ಡಿನಲ್ಲಿ ಇರುವ ಕೊರೊನ ಸೋಂಕಿತರ ಬಗ್ಗೆ ಮಾಹಿತಿ ನೀಡಿದರು.ಈಗಾಗಲೇ ವಾರ್ಡಿನ 450 ಮನೆಗೆಳಿಗೆ ನಗರಸಭೆಯ ಸದಸ್ಯೆ ಲೀಲಾವತಿ ಕೃಷ್ಣನಗರ ,ನಗರಸಭೆ ಯ ಕಂದಾಯ ಇಲಾಖೆಯ ಪುರುಷೋತ್ತಮ ಮತ್ತು ಸೇವಾ ಭಾರತಿಯ ಸದಸ್ಯರ ನೇತೃತ್ವದಲ್ಲಿ ಮನೆ ಮನೆ ಭೇಟಿ ನೀಡಿ ರೋಗದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ಸಭೆಯಲ್ಲಿ ಬೀಟ್ ಪೋಲಿಸ್, ಅಂಗನವಾಡಿ ಕಾರ್ಯಕರ್ತೆ, ಮಾಜಿ ಪುರಸಭಾ ಸದಸ್ಯ ಉದಯ ಕುಮಾರ್ ಆಚಾರ್ಯ, ಸೇವಾ ಭಾರತೀಯ ಸದಸ್ಯರಾದ ರವಿ ಆಚಾರ್ಯ, ಪ್ರಶಾಂತ್ ಕೃಷ್ಣನಗರ , ವೇಣುಗೋಪಾಲ್, ಪುಷ್ಪರಾಜ್, ಪ್ರಶಾಂತ್ ಕೆಮ್ಮಾಯಿ ಉಪಸ್ಥಿತರಿದ್ದರು. ಉದಯ ಕುಮಾರ್ ಆಚಾರ್ಯ ಇವರ ಸ್ವಾಗತಿಸಿ ಪ್ರಶಾಂತ್ ಕೆಮ್ಮಾಯಿ ವಂದಿಸಿದರು.