ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುತ್ತಿದ್ದ ಸಾಧು ಸ್ವಭಾವದ ‘ಅಣ್ಣು’ ಎಂಬ ಹೆಸರಿನ ಹೋರಿಯೊಂದು ನಾಪತ್ತೆಯಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗುತ್ತಿದೆ.
ಎ.30ರಿಂದ ಈ ಹೋರಿ ನಾಪತ್ತೆಯಾಗಿದೆ ಎನ್ನಲಾಗುತ್ತಿದೆ.

ಸಣ್ಣ ಕರುವಾಗಿದ್ದ ಸಂದರ್ಭದಲ್ಲೇ ದೇವಸ್ಥಾನದ ಬಳಿ ಯಾರೋ ಬಿಟ್ಟು ಹೋಗಿದ್ದ ಬಳಿಕ ಅದು ದೇವಸ್ಥಾನದ ವಠಾರದಲ್ಲಿ ಭಕ್ತರ ನೀಡುತ್ತಿದ್ದ ಬಾಳೆ ಹಣ್ಣುಗಳನ್ನು ತಿಂದು ಅಲ್ಲೇ ಸುತ್ತಮುತ್ತ ತಿರುಗಾಡುತ್ತಿತ್ತು.
ಸಾಧು ಸ್ವಭಾವನದ ಈ ಹೋರಿ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು. ಇತ್ತೀಚೆಗೆ ಶೃಂಗೇರಿ ಶ್ರೀಗಳು ಕೂಡಾ ಈ ಹೋರಿಗೆ ಹಣ್ಣುಗಳನ್ನು ನೀಡಿದ್ದರು.
ಕಳೆದ ಮೂರು ನಾಲ್ಕು ದಿನಗಳಿಂದ ಹೋರಿ ನಾಪತ್ತೆಯಾಗಿದೆ ಎಂದು ದೇವಳಕ್ಕೆ ಬರುವ ಭಕ್ತರು ಮಾಹಿತಿ ನೀಡಿದ್ದಾರೆ.


























