ಪುತ್ತೂರು: ಬಡಗನ್ನೂರು ವಲಯ ಕಾಂಗ್ರೆಸ್ ಸಭೆಯು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ರವರ ಮನೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಒಳ್ಳೇದನ್ನು ಮಾಡುತ್ತೇವೆ ಎಂದು ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರವರನ್ನು ವಿಪರೀತ ಏರಿಸಿದೆ ಮತ್ತು ಜನಸಾಮಾನ್ಯರು ದಿನ ನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿ ಜನರ ಬದುಕಿನ ಲ್ಲಿ ಸಂಕಷ್ಟ ತಂದಿದೆ, ಜಿ ಎಸ್ ಟಿ ತೆರಿಗೆಯು ವ್ಯಾಪಾರಸ್ತರಿಗೆ ಕಂಟಕವಾಗಿದೆ, ರೈತರ ಜೀವನವನ್ನೇ ನಾಶಮಾಡಲು ಹೊರಟಂತಿದೆ, ಬಿಜೆಪಿಯ ಜನವಿರೋಧಿ ಆಡಳಿತದ ಬಗ್ಗೆ ಜನತೆಗೆ ತಿಳಿ ಹೇಳಲು ಕಾರ್ಯಕರ್ತರಿಗೆ ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈಯವರು ಮಾತನಾಡಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಜೀವಾಳ, ಪಕ್ಷವನ್ನು ತಲಮಟ್ಟದಲ್ಲಿ ಗಟ್ಟಿಗೊಳಿಸಲು ಹೊರಟಿದ್ದೇವೆ,, ಇನ್ನು ಮುಂದೆ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಮಣೆ ಹಾಕಲಾಗುವುದು, ಬ್ಲಾಕ್ ಕಾಂಗ್ರೆಸ್ ಕೆಲಸ ಕಾರ್ಯ ಕರ್ತರ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು,
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಮಾತನಾಡಿ ಈಗ ಪೆಟ್ರೋಲ್ ನ ಲೀಟರ್ ಒಂದರ ಮೂಲ ದರ 33 ರೂಪಾಯಿ ಆಗಿರುತ್ತದೆ, ಇದಕ್ಕೆಬಿಜೆಪಿ ಸರಕಾರ 64 ರೂಪಾಯಿ ಟ್ಯಾಕ್ಸ್ ಹಾಕಿ 100 ರೂಪಾಯಿಗೆ ಮಾರುತ್ತಿದೆ, ಪೆಟ್ರೋಲ್, ಡಿಸೇಲ್ ಒಂದರಲ್ಲೆ ಕೇಂದ್ರ ಸರಕಾರ ಒಂದು ವರ್ಷಕ್ಕೆ 2.94 ಲಕ್ಷ ಕೋಟಿ ರೂಪಾಯಿ ಲಾಭಗಳಿಸುತ್ತಿದೆ, ಈ ಹಿಂದಿನ ಕಾಂಗ್ರೆಸ್ ಸರಕಾರ ಪೆಟ್ರೋಲ್ ಬಾಂಡ್ ಹೆಸರಲ್ಲಿ ಸಾಲ ಮಾಡಿದೆ, ಈ ಸಾಲವನ್ನು ನಾವು ತೀರಿಸಬೇಕಾಗಿದೆ ಎಂದು ದೇಶದ ಜನತೆಗೆ ಬಿಜೆಪಿಗರು ಸುಳ್ಳು ಹೇಳುತ್ತಿದ್ದಾರೆ, ವಾಸ್ತವ ವಿಚಾರ ಏನೆಂದರೆ ಈ ವರ್ಷ ಪೆಟ್ರೋಲ್ ಬಾಂಡ್ ಕೇವಲ 3,500 ರೂಪಾಯಿ ಮಾತ್ರ ಮೆಚ್ಯುರು ಆಗಿರುತ್ತದೆ, ಅದನ್ನು ಮಾತ್ರ ಪಾವತಿಸಿ ಇದೀಗ ಕಾಂಗ್ರೆಸ್ ಸರಕಾರ ಮಾಡಿದ ಸಾಲ ವನ್ನು ಕಟ್ಟಲು ಕೇಂದ್ರ ಸರಕಾರಕ್ಕೆ ಬೆಲೆ ಏರಿಸುವುದು ಅನಿವಾರ್ಯವಾಗಿದೆ ಎಂದು ಜನತೆಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ,ಬಿಜೆಪಿಗರ ಈ ರೀತಿಯ ಸುಳ್ಳು ಗಳ ಬಗ್ಗೆ ಜನತೆಗೆ ಮನವರಿಕೆ ಮಾಡಬೇಕಾಗಿದೆ ಎಂದರು.
ಮಹಮ್ಮದ್ ಬಡಗನ್ನೂರು ಮಾತನಾಡಿ ಶಕುಂತಲಾ ಟಿ ಶೆಟ್ಟಿ ಯವರು ಪುತ್ತೂರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ, ಆದರೆ ಕಳೆದ ಚುನಾವಣೆಯಲ್ಲಿ ಸೋಲಾಯಿತು, ಶಾಸಕರ ಅಭಿವೃದ್ಧಿ ಹಾಗೂ ಸಿದ್ದರಾಮಯ್ಯ ಸರಕಾರದ ಜನಪರ ಕಾರ್ಯ ಕ್ರಮಗಳನ್ನು ಜನತೆಗೆ ಮುಟ್ಟಿಸದೆ ಇರುವುದು ಹಾಗೂ ಬಿಜೆಪಿಯವರ ಅಪಪ್ರಚಾರದಿಂದ ಪಕ್ಷಕ್ಕೆ ಹಿನ್ನಡೆಯಾಗಲು ಕಾರಣ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ನಿನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ ಕೂಲಿ ಕಾರ್ಮಿಕರಿಗೆ, ರಿಕ್ಷಾ ಡ್ರೈವರ್ ಗಳಿಗೆ, ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿರುವ ರೋಗಿಗಳ ಅನುಕೂಲಕ್ಕಾಗಿ ನಮ್ಮ ಸರಕಾರ ತಂದ ಇಂದಿರಾ ಕ್ಯಾoಟೀನ್ ನನ್ನು ಮುಚ್ಚುವ ಷಡ್ಯಂತ್ರ ಸರಕಾರ ಮಾಡುತ್ತಿದೆ, ಸಿದ್ದರಾಮಯ್ಯ ಸರಕಾರ ತಂದ ಜನಪರ ಕಾರ್ಯಕ್ರಮವಾದ ಅನ್ನ ಬಾಗ್ಯ ಯೋಜನೆಯ ಅಕ್ಕಿ ಕಡಿತ ಗೊಳಿಸಿರುವ ಬಿಜೆಪಿ ಸರಕಾರ ಜನ ವಿರೋಧಿ ಸರಕಾರ ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜ,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಆಲಿ ಕುಂಹಿ ಕೊರಿಂಗಿಲ, ಬ್ಲಾಕ್ ಕಾರ್ಯದರ್ಶಿ ರೋಷನ್ ರೈ ಬನ್ನೂರು, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಬ್ಲಾಕ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಹರೀಶ್ ನಿಡಪಲ್ಲಿ,
ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶ್ರೀಮತಿ ಶಾರದಾ ಅರಸ್, ನಿಕಟ ಪೂರ್ವ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಸನಮ್ ನಝಿರ್, ಮಾಜಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಲಾವತಿ ಎಸ್ ಗೌಡ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಮ ಪಕ್ಕಳ, ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ನಝೀರ್,ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜ್ಯೋತಿ,ಬ್ಲಾಕ್ ಸಮಿತಿ ಸದಸ್ಯ ಗುರುಪ್ರಸಾದ್ ರೈ, ಕಾರ್ಯಕರ್ತರಾದ ಅಭಿದ್ ಕುಕ್ಕಾಜೆ, ಗೋಪಾಲಕೃಷ್ಣ ಸುಳ್ಯಪದವು, ಹಿರಿಯ ಕಾಂಗ್ರೆಸ್ಸಿಗ ಕೃಷ್ಣಮೂಲ್ಯಪೈರುಪುನಿ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು,ಬಡಗನ್ನೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ರವಿರಾಜ್ ರೈ ಸಜಂಕಾಡಿ ಸ್ವಾಗತಿಸಿದರು.