ಪುತ್ತೂರು: ದರ್ಬೆ ವೃತ್ತದ ಬಳಿ ಆ.18 ರಂದು ನಡೆದ ಎಸ್.ಡಿ.ಪಿ.ಐ ಪ್ರತಿಭಟನೆ ವೇಳೆ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ಅವಹೇಳನ ಪದಗಳನ್ನ ಬಳಸಿ, ದೇಶಭಕ್ತರಿಗೆ ನಿಂದಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಿ, ಸಾರ್ವಜನಿಕ ಅಶಾಂತಿ ನಿರ್ಮಿಸಿ ಕೋಮು ಭಾವನೆ ಕೆರಳಿಸಿದ್ದಲ್ಲದೆ ನೌಕರರ ವಿರುದ್ಧ ಕೆಟ್ಟ ಪದಗಳಿಂದ ಘೋಷಣೆ ಕೂಗಿ ಸೇರಿದ್ದ ಜನರಲ್ಲಿ ಜನಾಂಗೀಯ ದ್ವೇಷ ಬಿತ್ತುವ ಕಾರ್ಯವನ್ನು ಮಾಡಿದ್ದಾರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಅವಿನಾಶ್ ಪುರುಷರ ಕಟ್ಟೆ ಪುತ್ತೂರು ನಗರ ಠಾಣಾಧಿಕಾರಿ ಯವರಿಗೆ ದೂರು ನೀಡಿದ್ದಾರೆ.
ಎಸ್.ಡಿ.ಪಿ.ಐ ವತಿಯಿಂದ ದರ್ಬೆ ವೃತ್ತದ ಎದುರು
ನಡೆದ ಪ್ರತಿಭಟನಾ ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಹುತಾತ್ಮರಾದ ವಿನಾಯಕ ದಾಮೋದರ ಸಾವರ್ಕರ್ ರವರನ್ನು ಹೇಡಿ ಸಾವರ್ಕರ್, ದೇಶದ್ರೋಹಿ ಸಾವರ್ಕರ್ ಮುಂತಾದ ಕೆಟ್ಟ ಪದಗಳನ್ನು ಬಳಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವವನ್ನು ತೋರಿಸಿದ್ದಾರೆ. ಅದಲ್ಲದೇ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ರವರ ವಿರುದ್ಧ ಅಪಚಾರವಾಗುವಂತಹ ಸುಳ್ಳು ಸಂದೇಶವನ್ನು ರವಾನಿಸಿದ್ದಾರೆ. ಇದರಿಂದಾಗಿ ದೇಶ ಭಕ್ತನಾದ ನನಗೆ ಅತೀವ ನೋವುಂಟಾಗಿದೆ.
ಆದುದರಿಂದ ದೇಶಭಕ್ತರಾದ ಸಾವರ್ಕರ್ ರವರನ್ನು ದೇಶದ್ರೋಹಿ ಮತ್ತು ಹೇಡಿ ಎಂದು ಅಪಮಾನಗೊಳಿಸಿದ್ದಲ್ಲದೆ ಹಿಂದೂ ಧರ್ಮದವರೂ ಹೇಡಿಗಳು ಎನ್ನುವಂತೆ ಜರಿದು, ಹಿಂದೂಧರ್ಮೀಯನಾದ, ದೇಶಭಕ್ತ ಮತ್ತು ಸಾವರ್ಕರ್ ರವರ ಅಭಿಮಾನಿಯಾದ ನನ್ನ ಭಾವನೆಗೆ ಮಾತ್ರವಲ್ಲದೇ ಹಿಂದೂ ಸಮಾಜದ ಭಾವನೆಗೆ ಧಕ್ಕೆಯಾಗಿರುತ್ತದೆ. ಇದರಿಂದ ಜನರಲ್ಲಿ ಜನಾಂಗೀಯ ದ್ವೇಷ ಉಂಟಾಗಿ ಶತ್ರುತ್ವದ ಭಾವನೆ ಬೆಳೆಸಿ, ಸಾರ್ವಜನಿಕ ಅಶಾಂತಿ ನಿರ್ಮಾಣವಾಗುವ ಸಾಧ್ಯತೆಯಿರುತ್ತದೆ. ಹಿಂದೂ ಸಮಾಜದ ನಾಯಕರಾದ ಸಾವರ್ಕರ್ ರವರ ವಿರುದ್ಧ ಅಪಮಾನಕರವಾದ ಹೇಳಿಕೆ ಮತ್ತು ಘೋಷಣೆ ಕೂಗಿ
ಹಿಂದೂ ಮತ್ತು ಮುಸ್ಲಿಂ ಕೋಮು ಭಾವನೆಯನ್ನು ಕೆರಳಿಸಿರುತ್ತಾರೆ.
ಆರೋಪಿಗಳನ್ನು ನೋಡಿ
ಗುರುತಿಸಿದ್ದು ಮುಖತಃ ನೋಡಿದರೆ ಗುರುತಿಸಬಲ್ಲೆ.
ಆದುದರಿಂದ ಈ ಕಾರ್ಯಕ್ರಮದ ಆಯೋಜಕರು ಮತ್ತು ಘಟನೆಗೆ ಸಂಬಂಧಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.