ಕಾಪುಮಜಲು: ಫ್ರೆಂಡ್ಸ್ ಕಾಪುಮಜಲು ಇದರ ಆಶ್ರಯದಲ್ಲಿ 17 ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು. ಮಲರಾಯಿ ಮೂವರ್ ದೈವಂಗಳ್ ದೈವಸ್ಥಾನ ಕಾಪುಮಜಲು ಇದರ ಪ್ರಧಾನ ಅರ್ಚಕರಾದ ಉದಯ ನಾರಾಯಣ್ ಭಟ್ ಇವರು ದೀಪ ಬೆಳಗಿಸಿ ಪ್ರಾರ್ಥನೆ ಮಾಡುವುದರ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ವಿವಿಧ ಆಟೋಟ ಸ್ಪರ್ಧೆಯನ್ನು ಬೆಳಗ್ಗಿನಿಂದ ಸಂಜೆಯವರೆಗೂ ಏರ್ಪಡಿಸಲಾಗಿತ್ತು. ಸಂಜೆ ಸಮಾರೋಪ ಸಮಾರಂಭ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅರವಿಂದ್ ರೈ ಮೂರ್ಜೆಬೆಟ್ಟು ರವರು ವಹಿಸಿದ್ದರು. ಹಾಗೂ ಮುಖ್ಯ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಧನ್ಯವಾದ ಹೇಳುವುದರ ಮೂಲಕ ಕಾರ್ಯಕ್ರಮ ಮುಕ್ತಯಗೊಂಡಿತು.