ಪುತ್ತೂರು: ಕಳೆದ ಸುಮಾರು 25 ವರ್ಷದಿಂದ ಮನೆಗೆ ರಸ್ತೆ ಇಲ್ಲದೆ ಕಷ್ಟದಲ್ಲಿದ್ದ ದಿ.ಮುದರ ಎಂಬವರ ಮನೆಗೆ ಕೊನೆಗೂ ರಸ್ತೆ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣ ಮಾಡಲು ಮುಂದಾದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಶ್ರೀರಾಮ ಗೆಳೆಯರ ಬಳಗದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಡೂರು ಗ್ರಾಮದ ಪುತ್ತಿಲ ಎಂಬಲ್ಲಿ ದಿ. ಮುದರ ಎಂಬವರ ಕುಟುಂಬ ನೆಲೆಸಿದ್ದು ಮನೆಗೆ ರಸ್ತೆ ವ್ಯವಸ್ಥೆ ಇಲ್ಲದೆ ಕಷ್ಟ ಪಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ, ಸದಸ್ಯರಾದ ಅಶೋಕ್ ಕುಮಾರ್, ಬಾಲಕೃಷ್ಣ ಪೂಜಾರಿ, ಅರುಣಾ ಕಣ್ಣರ್ನೂಜಿ ಮತ್ತು ಅರುಣ್ ಪುತ್ತಿಲ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಬಿಕೆ ಯವರು ಸಮಸ್ಯೆಯನ್ನು ಜಾಗದವರ ಜೊತೆ ಮಾತುಕತೆಯ ಮೂಲಕ ಪರಿಹರಿಸಿ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿ ಮಾನವೀಯತೆ ಮೆರೆದಿದ್ದಾರೆ.
ರಸ್ತೆ ಹಾದು ಹೋಗುವ ಜಾಗದ ಮಾಲೀಕರಾದ ಪದ್ಮನಾಭ ಪೂಜಾರಿ ಹಾಗು ಬಾಬು ಮುಗೇರ ರಸ್ತೆಗೆ ಸ್ಥಳ ಬಿಟ್ಟು ಕೊಡುವ ಮೂಲಕ ರಸ್ತೆ ನಿರ್ಮಾಣ ಕಾರ್ಯಕ್ಕೆ ನೆರವಾಗಿದ್ದಾರೆ. ಈ ವಿವಾದದ ಮಾತುಕತೆಯಲ್ಲಿ 1ನೇ ವಾರ್ಡಿನ ಬಿಜೆಪಿ ಪಂಚಾಯತ್ ಸದಸ್ಯರು ಮತ್ತು ಶ್ರೀರಾಮ ಗೆಳೆಯರ ಸದಸ್ಯರು ಬಹಳಷ್ಟು ಶ್ರಮಿಸಿದ್ದು, ಕೊನೆಗೂ ದಿ.ಮುದರ ಎಂಬವರ ಮನೆಗೆ ರಸ್ತೆ ಸಂಪರ್ಕದ ಕನಸು ನನಸಾಗಿದೆ. ಮನೆಯ ರಸ್ತೆ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಸಹಕರಿಸಿದ ಪಂಚಾಯತ್ ಸದಸ್ಯರು ಮತ್ತು ಶ್ರೀರಾಮ ಗೆಳೆಯರ ಬಳಗಕ್ಕೆ ಮನೆಯವರು ಕೃತಜ್ಞತೆ ಸಲ್ಲಿಸಿದರು.
ರಸ್ತೆ ಕೆಲಸಕ್ಕೆ ಚಾಲನೆ:
ಪದ್ಮನಾಭ ಪೂಜಾರಿ ಮತ್ತು ಅಶೋಕ್ ಪುತ್ತಿಲ ತೆಂಗಿನಕಾಯಿ ಒಡೆಯುವ ಮೂಲಕ ರಸ್ತೆ ಕೆಲಸಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ್. ಕಾರ್ಯದರ್ಶಿ ಜನಾರ್ದನ ಪೂಜಾರಿ. ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ. ಅಶೋಕ್ ಪುತ್ತಿಲ. ಮುಂಡೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಅನಿಲ್ ಕಣ್ಣರ್ನೂಜಿ. ಅರುಣ್ ಕುಮಾರ್ ಪುತ್ತಿಲ. ಧನಂಜಯ.ಪ್ರಸಾದ್ ಬಿಕೆ.ರಾಧಾಕೃಷ್ಣ ಪುತ್ತಿಲ. ದನು. ಸಂತೋಷ್ ಸೇರಿದಂತೆ ಮನೆಯವರು ಉಪಸ್ಥಿತರಿದ್ದರು.