ಪುತ್ತೂರು: ಸಂಕಷ್ಟದಲ್ಲಿರುವವರಿಗೆ ಆರ್ಥಿಕವಾಗಿ ಸ್ಪಂದಿಸುವ ಮೂಲಕ ಸಹಾಯಹಸ್ತ ನೀಡುತ್ತಿರುವ ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಬಂಟ್ವಾಳ ತಾಲೂಕಿನ ಮೂರು ಕುಟುಂಬಗಳಿಗೆ ಸಹಕಾರ ನೀಡುವ ಮೂಲಕ ನೆರವಾದರು.
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಬರೆಂಜ ನಿವಾಸಿ, ನಾರಾಯಣ ಮೂಲ್ಯ ರವರ ಮಗ ಶೇಖರರವರ ಅನಾರೋಗ್ಯದ ಚಿಕಿತ್ಸೆಗೆ ಹಾಗೂ ಪುಣಚ ಗ್ರಾಮದ ಪರಿಯಲ್ತಡ್ಕ ನಿವಾಸಿ ಆಲಿಯವರಿಗೆ ಶೌಚಾಲಯ ನಿರ್ಮಾಣಕ್ಕೆ ಉದ್ಯಮಿ, ಪುಣಚ ಗ್ರಾಮದ ಕೊಚ್ಛಿ ಮನೆ ನಿವಾಸಿ ಲೀಲಾವತಿಯವರ ಮನೆ ರಿಪೇರಿಗೆ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರೀಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಆರ್ಥಿಕ ಸಹಾಯದ ಚೆಕ್ಕನ್ನು ಹಸ್ತಾಂತರಿಸಿದರು.