ಸುಳ್ಯ: ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿ ಬಳಿಕ ಬೆಂಕಿ ಹೊತ್ತಿಕೊಂಡು ಕಾರು ಉರಿದು, ಈ ವೇಳೆ ಚಾಲಕನೂ ಕಾರಿನಲ್ಲಿಯೇ ಲಾಕ್ ಆದ ಮತ್ತು ಕೊನೆ ಕ್ಷಣದಲ್ಲಿ ಪವಾಡ ಸದೃಶವಾಗಿ ಪಾರಾದ ಘಟನೆ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮಾವಿನಪಳ್ಳ ಅ.20 ರಂದು ರಾತ್ರಿ ನಡೆದಿದೆ.
ಭುವನ್ ಅತ್ಯಾಡಿ ಎಂಬವರು ಚಲಾಯಿಸುತ್ತಿದ್ದ ಮಾರುತಿ ವ್ಯಾಗನರ್ ಕಾರು ಬೆಂಕಿಗೆ ಅಹುತಿಯಾದ ಕಾರು. ಅ.20 ರಂದು ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭುವನ್ ರವರು ಕಾರಿನಲ್ಲಿ ಹೊರಟು ಮಾವಿನಪಳ್ಳ ರಸ್ತೆ ತಲುಪಿದ ವೇಳೆ ಕಾರಿನ ಬೋನೆಟ್ ನಿಂದ ಹೊಗೆ ಬರಲಾರಂಭಿಸಿದು, ಇದನ್ನು ಗಮನಿಸಿದ ಭುವನ್ ಕಾರನ್ನು ಬದಿಗೆ ನಿಲ್ಲಿಸಿದರು. ಈ ವೇಳೆ ಕಾರು ಏಕಾಏಕಿ ಲಾಕ್ ಆಗಿದೆ. ಕೆಲ ಸಮಯ ಕಳೆಯುವುದರೊಳಗಡೆ ಎದುರು ಬಾನೆಟ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಈ ವೇಳೆ ಅತಂಕಕ್ಕೆ ಒಳಗಾದ ಭುವನ್ ಹರಸಾಹಸ ಪಟ್ಟು ಡೋರ್ ತೆರೆದು ಕಾರಿನಿಂದ ಹೊರಗೆ ಇಳಿದಿದ್ದಾರೆ. ಬಳಿಕ ಅಲ್ಲೇ ರಸ್ತೆಯ ಪಕ್ಕದಲ್ಲಿದ್ದ ಮನೆಯವರಿಗೆ ವಿಷಯ ತಿಳಿಸಿದ್ದು,
ಅವರ ನೆರವಿನಿಂದ ಕಾರಿಗೆ ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಕಾರು ಸಂಪೂರ್ಣ ಸುಟ್ಟು ಹೋಗುವುದು ತಪ್ಪಿದರೂ ಕಾರಿನ ಇಂಜಿನ್ ಸಂಪೂರ್ಣ ಸುಟ್ಟು ಹಾನಿಯಾಗಿದೆ. ಭುವನ್ ರವರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.