ಪುತ್ತೂರು: ನೂತನವಾಗಿ ನಿರ್ಮಿಸಿರುವ ‘ಶ್ರೀ ಕೌಸ್ತುಭ’ ಜ್ಯುವೆಲ್ಲರ್ಸ್ ಇದರ ಶುಭಾರಂಭವು ಕೋರ್ಟ್ ರಸ್ತೆಯ ಪೈಲ್ಯಾಂಡ್ ಬಿಲ್ಡಿಂಗ್ ನಲ್ಲಿ ಫೆ.19 ರಂದು ನಡೆಯಲಿದೆ.
ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ ಮಹಾಲಕ್ಷ್ಮಿ ಮಂದಿರ, ಲಕ್ಷ್ಮೀ ದೇವಿ ಬೆಟ್ಟದ ಧರ್ಮದರ್ಶಿಗಳಾದ ಐತಪ್ಪ ಸಪಲ್ಯ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ರವರು ಆಗಮಿಸಲಿದ್ದಾರೆ.
ಅತ್ಯಾಕರ್ಷಕವಾಗಿರುವಂತಹ ಬೆಳ್ಳಿ, ಚಿನ್ನಾಭರಣಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೈಗೆಟುಕುವ ದರದಲ್ಲಿ ಲಭ್ಯವಿದೆ ಎಂದು ಮಳಿಗೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.