ಪುತ್ತೂರು: ಬಿರ್ದುದ ಕಂಬಳ ತುಳು ಮತ್ತು ಕನ್ನಡ ಸಿನಿಮಾದ ಶೂಟಿಂಗ್ ಗೆಜ್ಜೆಗಿರಿಯಲ್ಲಿ ಎ.26 ರಂದು ನಡೆಯಿತು. ಚಿತ್ರದ ಯಶಸ್ವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಪೀತಾಂಬರ ಹೆರಾಜೆ, ಗೌರವ ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್, ಜಯಂತ ನಡುಬೈಲ್, ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾರ್ಯದರ್ಶಿ ಮೋಹನ್ ದಾಸ್ ವಾಮಂಜೂರು, ಸಂತೋಷ್ ಕೋಟ್ಯಾನ್ ಉಗ್ಗೆಲ್ ಬೆಟ್ಟು, ರಾಜೇಂದ್ರ ಚಿಲಿಂಬಿ, ಹರೀಶ್ ಪೂಜಾರಿ, ಜಯರಾಮ ಬಂಗೇರ, ನಾರಾಯಣ ಮಚ್ಚಿನ, ಕನ್ನಡ ಮತ್ತು ತುಳು ಸಿನೆಮಾದ ಖ್ಯಾತ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ಡೆಡ್ಲಿ ಸೋಮ ಖ್ಯಾತಿಯ ನಾಯಕ ನಟರಾದ ಆದಿತ್ಯ, ಸ್ವರಾಜ್ ಶೆಟ್ಟಿ, ನವೀನ್ ಪಡೀಲ್ ಗೋಪಿನಾಥ್ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ರಾಮಕೃಷ್ಣ ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಡಾ. ರಾಜಶೇಖರ ಕೋಟ್ಯಾನ್ ರವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.