ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ನಡೆಯುವ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪ್ರತಿದಿನ ಸಂಭಾವನೆ ರಹಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಆಸಕ್ತಿ ಉಳ್ಳವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯಕ್ಷಗಾನ, ಭರತನಾಟ್ಯ, ತಾಳಮದ್ದಳೆ, ಭಕ್ತಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆಸ್ತಕರು ಮಾ.27 ರ ಒಳಗಾಗಿ ದೇವಳದ ಕಚೇರಿಗೆ ಅರ್ಜಿ ನೀಡುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮುಳಿಯ ಕೇಶವಪ್ರಸಾದ್ ಅವರು ತಿಳಿಸಿದ್ದಾರೆ.
ಮಾ.27ಕ್ಕೆ ಕಟ್ಟೆಪೂಜೆ ಮಾಲೀಕರ, ಸಮಿತಿ ಸಭೆ : ವಾರ್ಷಿಕ ಜಾತ್ರೋತ್ಸವದ ಸಮಯ ಸವಾರಿ ಕಟ್ಟೆಪೂಜೆ ನಡೆಸುವ ಕಟ್ಟೆ ಮಾಲೀಕರು ಮತ್ತು ಸಮಿತಿಯವರ ಸಭೆಯನ್ನು ಮಾ.27 ರಂದು ಸಂಜೆ ದೇವಳದ ಕಚೇರಿಯಲ್ಲಿ ಕರೆಯಲಾಗಿದೆ. ಎಲ್ಲಾ ಕಟ್ಟೆಪೂಜೆ ಸೇವಾಸಮಿತಿ ಮತ್ತು ಮಾಲಕರು ಹಾಜರಾಗುವಂತೆ ಅವರು ತಿಳಿಸಿದ್ದಾರೆ.