ನವದೆಹಲಿ: ರಾಜಸ್ಥಾನದ ಉದಯಪುರ್ನಲ್ಲಿ ನಡೆದ ಟೈಲರ್ ಕನ್ನಯ್ಯ ಲಾಲ್ ಹತ್ಯೆಯಿಂದ ಇಡೀ ದೇಶವೇ ಬಿಚ್ಚಿಬಿದ್ದಿದೆ. ಅಷ್ಟೇ ಅಲ್ಲ. ರಾಜಸ್ಥಾನದಲ್ಲಿ ಕೋಪಾಗ್ನಿಯ ಜ್ವಾಲೆ ಸ್ಫೋಟಗೊಂಡಿದೆ.
ಬಿಜೆಪಿಯ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ ಮಾತನಾಡಿದ್ದಕ್ಕೆ ಅನ್ಯಧರ್ಮದ ಇಬ್ಬರು ವ್ಯಕ್ತಿಗಳು ಐಸಿಸ್ ಮಾದರಿಯಲ್ಲಿ ಹತ್ಯೆ ಮಾಡಿದ್ದರು. ಆ ರಕ್ತಪಿಪಾಸುಗಳನ್ನು ರಾಜಸ್ಥಾನ ಪೊಲೀಸರು ಬೇಟೆಯಾಡಿ ಜೈಲಿಗಟ್ಟಿದ್ದಾರೆ. ಇನ್ನೊಂದೆಡೆ ಎನ್ಐಎ ತನಿಖೆ ವೇಳೆ ಸ್ಫೋಟ ಮಾಹಿತಿ ಬಹಿರಂಗವಾಗಿದೆ.
ಓರ್ವ ಹಂತಕನಿಗೆದ್ಯಂತೆ ಪಾಕಿಸ್ತಾನದ ಲಿಂಕ್..!!
ಟೈಲರ್ ಕನ್ನಯ್ಯ ಲಾಲ್ ಹತ್ಯೆಗೆ ಎಲ್ಲೆಲ್ಲೂ ಖಂಡನೆ ವ್ಯಕ್ತವಾಗಿದೆ. ಅಂತ್ಯಕ್ರಿಯೆಗೆ ಜನಸಾಗರವೇ ಹರಿದು ಬಂದಿತ್ತು. ಹತ್ಯೆ ಪ್ರಕರಣದ ತನಿಖೆಯನ್ನ ಎನ್ಐಎ ಕೈಗೆತ್ತಿಕೊಂಡಿದ್ದು, ಹಂತಕರ ಜನ್ಮವನ್ನ ಜಾಲಾಡುತ್ತಿದೆ. ಈ ವೇಳೆ ಕನ್ಹಯ್ಯ ಲಾಲ್ ಹತ್ಯೆಯ ಓರ್ವ ಹಂತಕನಿಗೆ ಪಾಕಿಸ್ಥಾನದ ಲಿಂಕ್ ಇರುವುದು ಪತ್ತೆಯಾಗಿದೆ.
ಆತನ ಮೊಬೈಲ್ನಲ್ಲಿ ಬಳಿ ಪಾಕಿಸ್ತಾನದ 10ಕ್ಕೂ ಹೆಚ್ಚು ನಂಬರ್ಗಳು ಪತ್ತೆಯಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪಾಕಿಸ್ತಾನದ ದಾವತ್ ಏ ಇಸ್ಲಾಂ ಭಯೋತ್ಪಾದಕ ಸಂಘಟನೆ ಜೊತೆ ಲಿಂಕ್ ಇರೋ ಸಾಧ್ಯತೆ ಇದೆ. ಆದ್ರೆ ಈ ಆರೋಪವನ್ನ ಪಾಕಿಸ್ತಾನ ನಿರಾಕರಿಸಿದೆ.