ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ (ರಿ.) ಅರ್ಪಿಸುವ, ಖ್ಯಾತ ಗಾಯಕ ಜಗದೀಶ್ ಪುತ್ತೂರು ರವರು ನಿರ್ದೇಶನ ಮತ್ತು ಗಾಯನ ಮಾಡಿರುವಂತಹ ‘ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ’ ಪುರಂದರ ದಾಸರ ಕೀರ್ತನೆಯು(ಭಕ್ತಿಗೀತೆ) ಆ.7ಕ್ಕೆ ಜಗದೀಶ್ ಪುತ್ತೂರು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಪಲ್ಲವಿ ಪ್ರಭು, ಸಮನ್ವಿ ರೈ, ಜನ್ಯ ಪ್ರಸಾದ್, ದಿವ್ಯ ನಿಧಿ ರೈ, ಸಾಹಿತ್ಯ ಆಚಾರ್ಯ ರವರು ಈ ಹಾಡಿನ ಸಹ ಗಾಯಕರಾಗಿದ್ದಾರೆ.
ವೀಡಿಯೊ: ಅರುಣ್ ರೈ ಪುತ್ತೂರು, ನಾಗೇಶ್ ಟಿ. ಎಸ್., ಧೀರಜ್ ಭಟ್, ಸಂಕಲನ: ಚರಣ್ ಆಚಾರ್ಯ ಪುತ್ತೂರು, ವೈ., ಟಿ.: ಶಿಶಿರ್ ರೈ ಚೆಲ್ಯಡ್ಕ ನಿರ್ವಹಿಸಿದ್ದಾರೆ.
ನವೀನ್ ಮಾವಜಿ, ಕಾವ್ಯಶ್ರೀ ನವೀನ್, ಶಾನ್ವಿ ಮಾವಜಿ ರವರು ಈ ಹಾಡಿನ ನಿರ್ಮಾಪಕರಾಗಿದ್ದಾರೆ.
ಈ ಹಾಡು ನಾಳೆ ಜಗದೀಶ್ ಪುತ್ತೂರು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.