ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಏ.೧೭ ರಂದು ವೈಭವದಿಂದ ನಡೆಯಿತು, ಎ.೧೮ ರ ಬೆಳಗ್ಗೆ ವಿವಿಧ ವೈದಿಕ ವಿಧಿ ವಿಧಾನಗಳು ನಡೆದ ಬಳಿಕ ಸಂಜೆ ಪುತ್ತೂರಿನಿಂದ ಸುಮಾರು 15 ಕಿ.ಮೀ. ದೂರದ ವೀರಮಂಗಲಕ್ಕೆ ಅವಭೃತ ಸ್ನಾನಕ್ಕೆ ಶ್ರೀ ಮಹಾಲಿಂಗೇಶ್ವರ ದೇವರು ತೆರಳಲಿದ್ದಾರೆ.
ದೇವರು ಅವಭೃತಕ್ಕೆ : ಸಂಜೆ ಹೊತ್ತಿಗೆ ಶ್ರೀ ದೇವರ ಬಲಿ ಉತ್ಸವ ದೇವಸ್ಥಾನ ಒಳಾಂಗಣದಲ್ಲಿ ನಡೆದು ಬಳಿಕ ಶ್ರೀ ದೇವರು 15 ಕಿ.ಮೀ. ದೂರದ ವೀರಮಂಗಲ ಕುಮಾರಧಾರ ನದಿಗೆ ಅವಭೃತ ಸ್ನಾನಕ್ಕೆ ತೆರಳುತ್ತಾರೆ. ಸ್ನಾನಕ್ಕೆ ತೆರಳುವ ಸಂದರ್ಭದಲ್ಲಿ ದಾರಿಯುದ್ದಕ್ಕೂ ಸುಮಾರು 49 ಕಟ್ಟೆಗಳಲ್ಲಿ ಪೂಜೆ ಅರ್ಪಿಸಿಕೊಂಡು ಏ.೧೯ ರ ಮುಂಜಾನೆ ಹೊತ್ತಿಗೆ ಕೊನೆಯ ಕಟ್ಟೆ ವೀರಮಂಗಲದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪಕ್ಕದಲ್ಲಿರುವ ಕುಮಾರಧಾರ ನದಿ ಕಿನಾರೆ ಕಟ್ಟೆಯಲ್ಲಿ ಪೂಜೆ ನಡೆದು ಬಳಿಕ ಶ್ರೀ ದೇವಸ್ಥಾನಕ್ಕೆ ಪುನಃ ಆಗಮಿಸುತ್ತಾರೆ.
ತಳಿರು ತೋರಣ : ಶ್ರೀ ದೇವರು ಅವಭೃತಕ್ಕೆ ತೆರಳುವ ಸಂದರ್ಭದಲ್ಲಿ ಪ್ರತೀ ಕಟ್ಟೆಗಳನ್ನು, ಬೀದಿ ಬೀದಿಗಳನ್ನು ತಳಿರು ತೋರಣ, ವಿದ್ಯುತ್ ಅಲಂಕಾರಗಳಿಂದ ಸಜ್ಜುಗೊಳಿಸಿ, ಶುಚಿಗೊಳಿಸಿ ಭಕ್ತರು ಹಣ್ಣುಕಾಯಿ ಸೇವೆಗಳ ಮೂಲಕ ಶ್ರೀ ದೇವರನ್ನು ಬರಮಾಡಿಕೊಂಡು ಪೂಜೆ ಸಮರ್ಪಿಸುತ್ತಾರೆ.
ಕಟ್ಟೆಗಳು : ಶ್ರೀ ದೇವರ ಅವಭೃತ ಸ್ನಾನಕ್ಕೆ ತೆರಳುವ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಕಟ್ಟೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಗಾಂಧಿಕಟ್ಟೆ, ಪುತ್ತೂರು ಸಿಟಿ ಆಸ್ಪತ್ರೆ ಕಟ್ಟೆ, ಅರುಣಾ ಥಿಯೇಟರ್ ವಠಾರಕಟ್ಟೆ, ವಾಸುದೇವ ನಾಯಕ್ ಕಟ್ಟೆ, ಕೆನರಾ ಬ್ಯಾಂಕ್ ಮುಂಭಾಗದ ಕಟ್ಟೆ, ಯೆಳ್ತಿಮಾರ್ ಬಾಬಣ್ಣ ಶೆಣೈ ಕಟ್ಟೆ, ದಾಮೋದರ ಶೆಣೈ ಕಟ್ಟೆ, ಕಲ್ಲಾರೆ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಎಂ. ವಿಠಲ ಕಾಮತ್ಕಟ್ಟೆ, ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಟ್ಟೆ, ಜೆ.ಕೆ. ಕಾಂಪ್ಲೆಕ್ಸ್ ಕಟ್ಟೆ, ಆಳ್ವ ಗ್ಯಾರೇಜ್ ಕಟ್ಟೆ, ಧನ್ವಂತರಿ ಆಸ್ಪತ್ರೆ, ಕೆ.ಕೆ. ಶೆಣೈ ಕಂಪೌಂಡ್, ದರ್ಬೆ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಡಾಲ್ಫಿ ರೇಗೋ ವಠಾರ, ಶ್ರೀ ಮಹಾಲಿಂಗೇಶ್ವರ ಭಕ್ತವೃಂದ ಸಾರ್ವಜನಿಕ ಕಟ್ಟೆ, ದರ್ಬೆ ವೃತ್ತ, ಗೋಪಾಲ ಪೈ, ಮಹಾಲಸಾ, ಕಾವೇರಿಕಟ್ಟೆ, ಮುರಳಿ ಮೋಹನ ಶೆಟ್ಟಿ, ಕೆಮ್ಮಿಂಜೆ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಕೂರ್ನಡ್ಕ ಅಣ್ಣಪ್ಪ ಕಟ್ಟೆ, ಲಾರ್ಡ್ ಮಹಾಲಿಂಗೇಶ್ವರ ಪೀಠಂ ಟ್ರಸ್ಟ್ ಕ್ಯಾಂಪ್ಕೋ ವಠಾರ, ಮರೀಲ್ ಕೃಷ್ಣಯ್ಯ ಮಾಸ್ಟರ್ ಮನೆ ವಠಾರ, ಮರೀಲ್ ಮಹಾಲಿಂಗೇಶ್ವರ ಕಟ್ಟೆ, ಮರೀಲ್ ಸಾರ್ವಜನಿಕ ಕಟ್ಟೆ, ದಿ.ಕೆ.ಕೆ.ಮಹಾಲಿಂಗ ಭಟ್ ಮನೆ ವಠಾರ, ಬೆದ್ರಾಳ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಶ್ರೀ ನಂದಿಕೇಶ್ವರ ಕಟ್ಟೆ, ಬೆದ್ರಾಳ ದೇವರಕಟ್ಟೆ, ಮುಕ್ವೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ, ಮುಕ್ವೆ ಮಜಲುಮಾರು ಪಿ.ಗಣಪತಿ ಭಟ್, ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನ ಕಟ್ಟೆ, ಪುರುಷರಕಟ್ಟೆ ಸಾರ್ವಜನಿಕ ಕಟ್ಟೆ, ಪದ್ಮಾವತಿ ಅಮ್ಮ ಕಟ್ಟೆ, ಪಾದೆಕಟ್ಟೆ, ಪುತ್ತೂರಾಯ ಕಟ್ಟೆ, ನರಿಮೊಗರು ಕಾಳಿಂಗಹಿತ್ಲು ಕಟ್ಟೆ, ಸುಬ್ರಾಯ ಹೆಬ್ಬಾರ್, ಕರೆಮನೆ ಕಟ್ಟೆ, ಕೊಡಿನೀರು ಸಾರ್ವಜನಿಕ ಅಶ್ವತ್ಥ ಕಟ್ಟೆ, ಪುತ್ತು ಸಾವಂತ ಕಟ್ಟೆ, ಅತಿಶಯ ಕ್ಷೇತ್ರ ಕೈಪಂಗಳ ಗುತ್ತುಮನೆ ಕಟ್ಟೆ, ಆನಾಜೆ ಹೆಬ್ಬಾರರ ಕಟ್ಟೆ, ಆನಾಜೆ ಸಾರ್ವಜನಿಕ ಕಟ್ಟೆ, ವೀರಮಂಗಲ ಗುತ್ತು, ವೀರಮಂಗಲ ದೇವಸ್ಥಾನ ಕಟ್ಟೆ, ನದಿ ಕಿನಾರೆ ಕಟ್ಟೆಗಳಲ್ಲಿ ಪೂಜೆ ನಡೆಯುತ್ತದೆ. ಏ.೧೯ ರಂದು ಬೆಳಗ್ಗೆ ಶ್ರೀ ದೇವರ ಜಾತ್ರೋತ್ಸವ ಧ್ವಜಾಅವರೋಹಣದೊಂದಿಗೆ ಸಂಪನ್ನಗೊಳ್ಳಲಿದೆ. ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ಪ್ರಾರಂಭ, ಅಂಙಣತ್ತಾಯ, ಹುಲಿಭೂತ, ರಕ್ತೇಶ್ವರೀ ದೈವಗಳ ನೇಮೋತ್ಸವ ನಡೆಯಲಿದೆ.