ಪುತ್ತೂರು: ಪ್ರಗತಿ ಸ್ಟಡಿಸೆಂಟರ್ನ ಸಂಚಾಲಕ ಗೋಕುಲ್ನಾಥ್ ಅವರ ತಾಯಿ ಮೂಲತಃ ಕಲ್ಲಾರೆಯವರಾದ, ಪ್ರಸ್ತುತ ಮುಕ್ವೆಯಲ್ಲಿ ಓಂಕಾರ್ ಲೇಔಟ್ನ ದ್ವಾರಕ ನಿವಾಸಿ ಸಾವಿತ್ರಿವಿಜಯನ್ (90)ರವರು ಜ.28 ರಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅನಾರೋಗ್ಯದಿಂದಾಗಿ ಸಾವಿತ್ರಿವಿಜಯನ್ ರವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಇಂದು ನಿಧನರಾದರು.
ಸಾವಿತ್ರಿವಿಜಯನ್ ಅವರು ಮುಕ್ವೆಯಲ್ಲಿ ಪುತ್ರ ದಿ.ಗೋಪಿನಾಥ್ ಅವರ ಮನೆಯಲ್ಲಿ ಸೊಸೆ ಲಲನಾ ಅವರ ಜೊತೆ ವಾಸವಿದ್ದರು.
ಮೃತರು ಪುತ್ರ ಪ್ರಗತಿ ಸ್ಟಡಿ ಸೆಂಟರ್ನ ಗೋಕುಲ್ನಾಥ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ..