ಮಾಣಿ ಗ್ರಾಮದ ಬಹು ಬೇಡಿಕೆಯ ಪೋಲೀಸ್ ಔಟ್ ಪೋಸ್ಟ್ ನಿರ್ಮಾಣದ ಬಗ್ಗೆ ಇಂದೇ ತೀರ್ಮಾನ ತೆಗೆದುಕೊಳ್ಳಲಾಗುದು ಎಂದು ಕಳ್ಳ ಕಾಕರ ಭೀತಿಯಿಂದ ಆತಂಕಿತರಾದ ಮಾಣಿಯ ಸಾರ್ವಜನಿಕರಿಗೆ ವಿಟ್ಲ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ವಿನೋದ್ ರೆಡ್ಡಿ ಯವರು ಭರವಸೆ ನೀಡಿದ್ದಾರೆ. ಮಾಣಿಯಲ್ಲಿ ಪೋಲೀಸ್ ಔಟ್ ಪೋಸ್ಟ್ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರ ಪರವಾಗಿ ಬಂದ ಮನವಿಗೆ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಲಾಕ್ ಡೌನ್ ಜಾರಿಯಲ್ಲಿರುವ ಈ ಕಠಿಣ ಸಮಯದಲ್ಲಿ ಕೂಡ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಕಾಪಿಕಾಡು
ಅಪರಿಚಿತ ವ್ಯಕ್ತಿಗಳಿಬ್ಬರು ಅನುಮಾನಾಸ್ಪದವಾಗಿ ಅಕ್ಟಿವಾ ಸ್ಕೂಟರಲ್ಲಿ ತಿರುಗಾಡಿ ಕಳ್ಳತನ ಕ್ಕೆ ಹೊಂಚು ಹಾಕುತ್ತಿದ್ದ ಬಗ್ಗೆ ಸಾರ್ವಜನಿಕ ದೂರು ದುಮ್ಮಾನಕ್ಕೆ ತಕ್ಷಣವೇ ಸ್ಪಂದಿಸಿ ಸಿಬ್ಬಂದಿಗಳನ್ನು ಕಳುಹಿಸಿದ್ದರು ಎಂಬುದು ಉಲ್ಲೇಖನೀಯ. ಜನರ ದೂರು ದುಮ್ಮಾನಗಳಿಗೆ ಶೀಘ್ರವಾಗಿ ಸ್ಪಂದಿಸುವ ವಿಟ್ಲ ಪೋಲೀಸ್ ಠಾಣಾದಿಕಾರಿ ವಿನೋದ್ ರೆಡ್ಡಿಯವರ ಕಾರ್ಯ ವೈಖರಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.