ಬೆಳ್ತಂಗಡಿ : ತಾಯಿಯ ಜೊತೆ ನಿತ್ಯವೂ ಮನೆಯ ತೋಟದ ಕೆರೆಯ ಬಳಿಗೆ ಹೋಗುತ್ತಿದ್ದ ಒಂದು ವರ್ಷ ಒಂಭತ್ತು ತಿಂಗಳ ಗಂಡು ಮಗುವೊಂದು ತಾಯಿಗೆ ಅರಿವಿಲ್ಲದೆ ಕೆರೆಯ ಬಳಿ ಹೋಗಿದ್ದು, ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪಟ್ಟೋಡಿಯಲ್ಲಿ ನಡೆದಿದೆ.
ವೀರಪ್ಪ ಅವರ ಪುತ್ರ ಪ್ರಣೀತ್ ಮೃತಪಟ್ಟ ಮಗು.
ಪ್ರಣೀತ್ ಯಾವತ್ತೂ ತನ್ನ ತಾಯಿಯ ಜೊತೆ ಕೆರೆಯ ಬಳಿ ತೆರಳುತ್ತಿದ್ದ. ಶುಕ್ರವಾರ ತಂದೆ, ತಾಯಿ ಇಬ್ಬರೂ ಮನೆ ಕೆಲಸದಲ್ಲಿ ನಿರತರಾಗಿದ್ದಾಗ ಅವರ ಅರಿವಿಗೆ ಬಾರದೆ ಕೆರೆಯ ಬಳಿಗೆ ಮಗು ತೆರಳಿತ್ತು. ಮಗು ಕಾಣದಾಗ ಹುಡುಕುತ್ತಾ ತಂದೆ ವೀರಪ್ಪ ಅವರು ಕೆರೆಯಲ್ಲಿ ಪರಿಶೀಲಿಸಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.