ಪುತ್ತೂರು : ಕಳೆದ ಎರಡು ತಿಂಗಳ ವೇತನ ವಿಳಂಬವಾಗಿದ್ದು, ಶೀಘ್ರ ವೇತನಕ್ಕೆ ಆಗ್ರಹಿಸಿ ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ವತಿಯಿಂದ ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶಾಸಕರು ಸಂಭಂದಪಟ್ಟ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ವಾರದೊಳಗೆ ವೇತನ ಪಾವತಿಸುವಂತೆ ಮತ್ತು ವಿಳಂಬವಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷರಾದ ಕಮಲ, ಕಾರ್ಯದರ್ಶಿ ಪುಷ್ಪಲತಾ, ಖಜಾಂಜಿ ಶೈಲಜ, ಉಪಾಧ್ಯಕ್ಷರಾದ ಸಂಧ್ಯಾ, ಮಾಜಿ ಜಿಲ್ಲಾಧ್ಯಕ್ಷರಾದ ಅರುಣ.ಡಿ., ಮಾಜಿ ಕಾರ್ಯದರ್ಶಿ ಜಯಲತ ಉಪಸ್ಥಿತರಿದ್ದರು.