ಪುತ್ತೂರು : ನಗರಸಭೆ ವ್ಯಾಪ್ತಿಯ ಪುತ್ತೂರು ಬಲ್ನಾಡು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳು ಹಾಗೂ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಚರಂಡಿ ವ್ಯವಸ್ಥೆ ಮತ್ತು ಇನ್ನಿತರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ನಗರಸಭೆಯ ನಾಮ ನಿರ್ದೇಶಿತ ಸದಸ್ಯ ಷರೀಫ್ ಬಲ್ನಾಡ್ ರವರ ನೇತೃತ್ವದಲ್ಲಿ ಪೌರಾಯುಕ್ತರಾದ ಮಧು ಮನೋಹರ್ ರವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ, ಇಸ್ಮಾಯಿಲ್ ಎಂ.ಬಿ, ಜುಬೇರ್, ಲತೀಫ್, ಬಾಪಾಕುನ್ಜಿ, ಸಂಸುದ್ದೀನ್, ರಾಧಾಕೃಷ್ಣ, ಜನಾರ್ದನ, ಆನಂದ ಕರಿಯಡ್ಕ, ಮಹಮ್ಮದ್ (ಮಮ್ಮದ್) ಉಪಸ್ಥಿತರಿದ್ದರು.