ಉಪ್ಪಿನಂಗಡಿ: ಇಲ್ಲಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ
ಸಾಧನೆ ತೋರುತ್ತಿರುವ ಯುವ ಸಂಘಟನೆ ಟೀಮ್ ದಕ್ಷಿಣ ಕಾಶಿಯ 2026 ಸಾಲಿನ ನೂತನ | ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಪೆರಿಯಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರಾಗಿ ರವೀಂದ್ರ ಆಚಾರ್ಯ, ಉಪಾಧ್ಯಕ್ಷರಾಗಿ ತಿಮ್ಮಪ ಗೌಡ ಇಳಂತಿಲ, ಪ್ರಧಾನ ಕಾರ್ಯದರ್ಶಿಯಾಗಿ ಆದೇಶ್ ಶೆಟ್ಟಿ ಜೊತೆ ಕಾರ್ಯದರ್ಶಿಯಾಗಿ ವಿಜೇತ್ ಕುಮಾರ್ ಜೈನ್, ಕೋಶಾಧಿಕಾರಿಯಾಗಿ ಸಚಿನ್ ಎ. ಎಸ್, ಕಾನೂನು ಸಲಹೆಗಾರರಾಗಿ ಸಂದೇಶ್ ನಟ್ಟಿಬೈಲ್ ರವರು ಆಯ್ಕೆಗೊಂಡರು.
ಗಿರೀಶ್ ಆಚಾರ್ಯ, ಕಿಶೋರ್ ನೀರಕಟ್ಟೆ, ಸುನೀಲ್ ಅನಾವು, ರತನ್ ಕಟ್ಟೆಚ್ಚಾರ್, ಪವನ್ ಪನ್ನೋಟ್ಟು, ಪ್ರಶಾಂತ್ ನೆಕ್ಕಿಲಾಡಿ, ಮಹೇಶ್ ಬಜತ್ತೂರು, ಪ್ರಮೋದ್ ಅರ್ಬಿ ಉಪಸ್ಥಿತರಿದ್ದರು.


























