ವಿಟ್ಲ: ಖಾಸಗಿ ಬಸ್ ನಿಲ್ದಾಣದಲ್ಲಿ ಬೀದಿದೀಪ ಕೆಟ್ಟು ಹತ್ತು ದಿನಗಳೇ ಕಳೆದರೂ ದುರಸ್ಥಿಗೆಂದು ಕೊಂಡೊಯ್ಯಿದ ಬೀದಿದೀಪಗಳನ್ನು ಅಳವಡಿಸಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ಈ ಬಗ್ಗೆ Zoom.InTV ಯಲ್ಲಿ ವರದಿಯನ್ನು ಪ್ರಕಟಿಸಿದ್ದು, ವರದಿಯ ಫಲಶ್ರುತಿಯಾಗಿ ಸಂಜೆ ವೇಳೆಗೆ ಬಸ್ ನಿಲ್ದಾಣದ ಬಳಿಯ ಕಂಬಕ್ಕೆ ಬೀದಿದೀಪಗಳನ್ನು ಅಳವಡಿಸಲಾಯಿತು.
ರಸ್ತೆಯಲ್ಲಿ ಸಂಚರಿಸಲು ಬೀದಿದೀಪ ಅವಶ್ಯ. ಅದೇ ರೀತಿ ವಿಟ್ಲದ ಕೇಂದ್ರ ಬಿಂದುವಾದ ಈ ಖಾಸಗಿ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆಯೂ ಹಲವು ಕಡೆಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುತ್ತಾರೆ ಈ ವೇಳೆ ಬೀದಿದೀಪವೂ ಅವಶ್ಯಕವಾಗಿದೆ.
ಕಳೆದ ಹತ್ತು ದಿನಗಳಿಂದ ಬಸ್ ಸ್ಟಾಂಡ್ ಬಳಿಯ ಬೀದಿದೀಪಗಳು ಕೆಟ್ಟು ದೀಪಗಳು ಬೆಳಗದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸಾರ್ವಜನಿಕರು ಬೇಸರ ವ್ಯಕ್ತ ಪಡಿಸುತ್ತಿದ್ದರು. ಈ ಬಗ್ಗೆ Zoom.InTVಯೂ ವರದಿ ಪ್ರಕಟಿಸಿದ್ದು, ವರದಿಗೆ ಸ್ಪಂದಿಸಿದ ವಿಟ್ಲ ಪಟ್ಟಣ ಪಂಚಾಯತ್ ಸಂಜೆ ವೇಳೆಗೆ ಬೀದಿದೀಪಗಳನ್ನು ಅಳವಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.