ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ಅಸ್ತಿತ್ವಕ್ಕೆ ಬಂದ ತೆಂಗಿನ ಬೆಳೆ ಬೆಳೆಯುವ ರೈತರಿಗಾಗಿಯೇ ಹುಟ್ಟಿಕೊಂಡ ಮೊದಲ ಸಂಸ್ಥೆಯೊಂದು ಇದೀಗ ಮಹತ್ತರವಾದ ಕಾರ್ಯ ಮಾಡಿದೆ.
ತೆಂಗು ಬೆಳೆಯುವ ರೈತರಿಗೆ ಹಾಗೂ ತೆಂಗಿನಮರ ಹತ್ತಿ ತೆಂಗಿನಕಾಯಿ ಕೀಳುವ ಕಾರ್ಮಿಕ ವರ್ಗದವರಿಗೂ ವಿಶೇಷ ಯೋಜನೆ ರೂಪಿಸಿಕೊಂಡಿರುವ ಜಿಲ್ಲೆಯ ಮೊದಲ ಸಂಸ್ಥೆ ಇದಾಗಿದ್ದು ಈಗಾಗಲೇ ದ. ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕೊಂಕಣ ತೋಟ ಎಂಬಲ್ಲಿಯ ಚಂದಪ್ಪ ಪೂಜಾರಿ ಎಂಬ ಸುಮಾರು 28 ವರ್ಷಗಳಿಂದ ತೆಂಗಿನಕಾಯಿ ಕೀಳುವ ಕೆಲಸ ಮಾಡಿಕೊಂಡಿದ್ದರು. ಸುಮಾರು 1 ತಿಂಗಳ ಹಿಂದೆ ತನ್ನ ಮನೆಯ ಪಕ್ಕದಲ್ಲಿ ಕಾಯಿ ಕೀಳುವ ಸಂದರ್ಭದಲ್ಲಿ ಆಯಾ ತಪ್ಪಿ ತೆಂಗಿನ ಮರದಿಂದ 30 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿ ಅವರ ಬಡ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದಾಗ ದ.ಕ.ಜಿಲ್ಲೆಯ ತೆಂಗು ರೈತ ಸಂಸ್ಥೆಯ ಸಿಬ್ಬಂದಿಗಳು ನೋಂದಣಿ ಮಾಡಲು ಭೇಟಿ ಕೊಟ್ಟ ಸಂದರ್ಭದಲ್ಲಿ ಅವರ ಮನೆಯ ಪರಿಸ್ಥಿತಿಯನ್ನು ಸಂಸ್ಥೆಗೆ ತಿಳಿಸಿದರು.
ಇದನ್ನು ಮನಗಂಡ ಸಂಸ್ಥೆಯ ಆಡಳಿತ ಮಂಡಳಿ ಮನೆಗೆ ಭೇಟಿ ಕೊಟ್ಟು ತುರ್ತು ಚಿಕಿತ್ಸೆಗಾಗಿ 10000 ರೂ. ಚೆಕ್ ಅನ್ನು ನೀಡಿರುತ್ತದೆ. ಹಾಗೂ ಈ ಬಡ ಕುಟುಂಬದ ಮಕ್ಕಳಿಗೆ
ಸಂಸ್ಥೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಬಡ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಚಿಕಿತ್ಸಾ ವೆಚ್ಚ ಭರಿಸಲು ದಾನಿಗಳು ಸಹಕರಿಸುವಂತೆ ಪ್ರಕಟಣೆಯಲ್ಲಿ ವಿನಂತಿದ್ದಾರೆ.
ಬ್ಯಾಂಕ್ ಖಾತೆ ಗಳ ವಿವರ
ಚಂದಪ್ಪ
ಮೊಬೈಲ್ No : 8970164454
8217632215
ಕೆನರಾ ಬ್ಯಾಂಕ್ ಬೋಳಿಯಾರ್
ಖಾತೆ ಸಂಖ್ಯೆ-8802108000117
IFSC CODE -CNRB0008802