ಬೆಳ್ತಂಗಡಿ: ಮನೆಯಿಂದ ಹೊರಹೋದ ಬಾಲಕನೋರ್ವ ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಅ.27ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ನಡೆದಿದೆ.
ಲಾಯಿಲ ಗ್ರಾಮದ ಪಡ್ಡಾಡಿ ಮನೆ ನಿವಾಸಿ ಬಾಬು ಎಂಬವರ ಪುತ್ರ ಬಿಪಿನ್(17) ನಾಪತ್ತೆಯಾದ ಬಾಲಕ.
ಪ್ರಥಮ ಪಿಯುಸಿ ಮುಗಿಸಿ ತಂದೆಯೊಂದಿಗೆ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಬಿಪಿನ್. ಅ.19 ರಂದು ಬೆಳಿಗ್ಗೆ ಸ್ವ-ಸಹಾಯ ಸಂಘಕ್ಕೆ ಹಣ ಕಟ್ಟಲು ಹೋದವನು ಸಂಜೆಯಾದರೂ ಮನೆಗೆ ವಾಪಾಸ್ಸು ಬಂದಿರಲಿಲ್ಲವೆನ್ನಲಾಗಿದೆ. ಬಳಿಕ ಅ. 21 ರಂದು ಆತನ ತಾಯಿಗೆ ಮೊಬೈಲ್ ಕರೆ ಮಾಡಿ ಮನೆಗೆ ವಾಪಾಸ್ಸು ಬರುವುದಾಗಿ ಹೇಳಿದ್ದ ಎಂದು ತಿಳಿದು ಬಂದಿದೆ.