ಕೊರೊನಾ ಎಂಬ ಈ ಮಹಾಮಾರಿಯ ಸಂದರ್ಭದಲ್ಲಿ ಯಾರೂ ಕೂಡ ಅಶ್ಪೃಶ್ಯರಾಗಬಾರದು ಅಥವಾ ಕೊರೊನಾ ಭಾದಿತರು ಹಾಗೂ ಕೊರೋನಾದಿಂದ ಮೃತರಾದ ಶರೀರದ ಶವಸಂಸ್ಕಾರ ಮಾಡಲು ಯಾರು ಇಲ್ಲ ಎಂದು ಆಗಬಾರದು ಎಂದು ಹಿಂದೂ ಸಂಘಟನೆಗಳುಜವಾಬ್ದಾರಿಯಿಂದ ಮಾಡಲು ಎಂದಿಗೂ ಸಿದ್ದವಾಗಿದೆ. ಅ ದೃಷ್ಟಿಯಲ್ಲಿ ಯಾವುದೇ ಹಿಂದೂವಿನ ಅಂತ್ಯ ಸಂಸ್ಕಾರ ಹಿಂದೂ ಸಂಪ್ರದಾಯ ಪ್ರಕಾರದಲ್ಲಿಯೇ ನಡೆಯಬೇಕು ಎಂಬ ದೃಷ್ಟಿಯಿಂದ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ನೀಡಿದ ಹೇಳಿಕೆ ಸರಿಯಾಗಿದೆ.
ಆದರೆ ಅದನ್ನು ಇಂತಹ ಸಂಕಷ್ಟ ಸಂದರ್ಭದಲ್ಲಿ ಅಪಾರ್ಥ ಮಾಡಿಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಇದನ್ನು ಖಡಾಖಂಡಿತವಾಗಿ ಖಂಡಿಸುತ್ತೇವೆ ಎಂದು ಬಜರಂಗದಳ ಪ್ರಮುಖರು ಹೇಳಿದ್ದಾರೆ.
ಸೇವಾ ಸಂಸ್ಕಾರ ಸುರಕ್ಷಾ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಈ ದೇಶ, ಈ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆ ಬಜರಂಗದಳ. ಸಂಘದ ಮಾರ್ಗದರ್ಶನದಲ್ಲಿ ಸಮಾಜದ ಕಟ್ಟ ಕಡೆಯ ಹಿಂದೂವಿನ ನೋವಿಗೂ ಸ್ಪಂದನೆ ಮಾಡುವ ಸಂಘಟನೆ ಬಜರಂಗದಳವಾಗಿದೆ.
ಸಂಘಟನೆ ಏನೂ ಎಂಬುದು ಹಿಂದೂ ಸಮಾಜಕ್ಕೆ ತಿಳಿದಿದೆ.
ಇಂತಹ ಅಪಪ್ರಚಾರ ಮಾಡುತ್ತಿರುವವರ ದೃಶ್ಕೃತ್ಯಗಳು ಇಡೀ ರಾಜ್ಯಕ್ಕೆ ತಿಳಿದಿದೆ ಎಂದಿದ್ದಾರೆ.
ಹುಣಸೂರಿನಲ್ಲಿ ಹಣಕ್ಕೊಸ್ಕರ ಮಕ್ಕಳ ಅಪಹರಣ ಮಾಡಿ ಹತ್ಯೆ ಮಾಡಿರುವುದರಿಂದ ಹಿಡಿದು ಹಿಂದೂ ಕಾರ್ಯಕರ್ತರ ಹತ್ಯೆಗಳು ಹಾಗೂ ದೇಶದ್ಯಾಂತ ಗಲಭೆ ಹಾಗೂ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವ ಸಂಘಟನೆಗಳು ನಮಗೆ ಬುದ್ದಿ ಹೇಳುವ ಅಗತ್ಯವಿಲ್ಲ ಎಂದು ಸುನಿಲ್ ಕೆ. ಆರ್ ಪ್ರಾಂತ ಸಂಚಾಲಕ್ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಮುರಳಿಕೃಷ್ಣ ಹಸಂತ್ತಡ್ಕ ಪ್ರಾಂತ ಸಹ ಸಂಚಾಲಕ್ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಇವರು ಹೇಳಿದ್ದಾರೆ.