‘ಕಾಂತಾರ’ದ ಯಶಸ್ಸು ಕನ್ನಡ ಸಿನಿಮಾ ರಂಗದ ಒಂದು ದೊಡ್ಡ ಸಾಧನೆ, ಭಾರತದ ಎಲ್ಲ ಭಾಷೆಯ ಸಿನಿಮಾಗಳಿಗೆ ಮಾದರಿಯಾಗಿ ನಿಂತಿದೆ ‘ಕಾಂತಾರ’ ಸಿನಿಮಾ, ಕನ್ನಡದಲ್ಲಿ ಒಂದು ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿದೆ. ಕಾಂತಾರಕ್ಕೆ ಸಿಕ್ಕ ಯಶಸ್ಸು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಭರವಸೆಯನ್ನೇ ಮೂಡಿಸಿದೆ.
ಆದರೇ ಯಶಸ್ಸಿನ ಹಾದಿಯಲ್ಲಿರುವ ಕಾಂತಾರಕ್ಕೆ ಒಂದಿಷ್ಟು ಸಂಕಷ್ಟಗಳು ಎದುರಾಗಿತ್ತು, ಅದು ಆ ಸಿನಿಮಾದಲ್ಲಿ ಬರುವ “ವರಾಹ ರೂಪಂ” ಹಾಡು, ‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡು ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನ ‘ನವರಸಂ..’ ಹಾಡಿನ ಟ್ಯೂನ್ ಅನ್ನು ‘ವರಾಹ ರೂಪಂ..’ನಲ್ಲಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

‘ತೈಕ್ಕುಡಂ ಬ್ರಿಡ್ಜ್’ನವರು ಕೇರಳದ ಕೋಯಿಕ್ಕೋಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ‘ವರಾಹ ರೂಪಂ..’ ಹಾಡನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ಹೊರಡಿಸಿತ್ತು. ಈ ಸಂಬಂಧ ‘ಹೊಂಬಾಳೆ ಫಿಲ್ಮ್ಸ್’ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಕೋರ್ಟ್ ತೀರ್ಪು ಕಾಂತಾರದ ಕಡೆಯಾಗಿದೆ.
ಈ ತೀರ್ಪು ಭಾರೀ ವೈರಲ್ ಆಗುತ್ತಿದೆ.., ಹೌದು ಕಾಂತಾರದಲ್ಲಿ ಬರುವ “ಕೋರ್ಟ್ಗೆ ಹೋಗ್ತಿ… ಮೆಟ್ಟಿಲಲ್ಲಿ ತೀರ್ಮಾನ ನಾನು ಕೊಡ್ತೇನೆ” ಎಂಬ ಡೈಲಾಗ್ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ, ಮೊನ್ನೆ ಕೇರಳದ ಸ್ಥಳೀಯ ಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಈ ವಿಡಿಯೋ ಮತ್ತು ಫೋಸ್ಟರ್ ವೈರಲ್ ಆಗುತ್ತಿದೆ.
ಕಾಂತಾರದ ಈ ಡೈಲಾಗ್ ಭಾರೀ ಸಂಚಲನವನ್ನು ಸೃಷ್ಟಿ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳನ್ನು ಸೃಷ್ಟಿ ಮಾಡಿದೆ. ‘ಕೋರ್ಟ್ಗೆ ಹೋಗ್ತಿ… ಮೆಟ್ಟಿಲಲ್ಲಿ ತೀರ್ಮಾನ ನಾನು ಕೊಡ್ತೇನೆ’ ಎಂಬ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಸೃಷ್ಟಿ ಮಾಡಿದಲ್ಲದೆ, ಇದು ಕಾಂತಾರದ ಗೆಲುವು ಎಂದು ಹೇಳಲಾಗುತ್ತಿದೆ…