ಪುತ್ತೂರು: ಡ್ರಾಯಿಂಗ್ ಮಾಸ್ಟರ್ ಎಂದೇ
ಚಿರಪರಿಚಿತರಾಗಿದ್ದ ಸಾಮೆತ್ತಡ್ಡ ಕರಿಯಾಲ ನಿವಾಸಿ ಎಮ್.
ಶಿವರಾಮ ಭಟ್ (91) ಆವರು ಮೇ.10 ರಂದು
ಸ್ವಗೃಹದಲ್ಲಿ ನಿಧನರಾದರು.
ಎಮ್. ಶಿವರಾಮ್ ಭಟ್ ಅವರು ಪುತ್ತೂರು ಸೈಂಟ್
ವಿಕ್ಟರ್ ಶಾಲೆಯಲ್ಲಿ ಹಲವು ವರ್ಷಗಳ ಕಾಲ ಚಿತ್ರಕಲಾ
ಶಿಕ್ಷಕರಾಗಿ ಬಳಿಕ ಪ್ರಗತಿಪರ ಕೃಷಿಕರಾಗಿ ಜೀವನ ಸಾಗಿಸಿದರು. ತನ್ನ ಜೀವನದುದ್ದಕ್ಕೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು ವಿವೇಕಾನಂದ
ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರಾಗಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಥಾಪಕ ಅಧ್ಯಕ್ಷರಾಗಿ, ಸಾಮೆತ್ತಡ್ಕ ಶಾಲೆಯ ಆಡಳಿತ ಸಮಿತಿ ಖಜಾಂಜಿಯಾಗಿ, ಮಿತ್ತೂರು ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಪಾರ್ವತಿ, ಪುತ್ರರಾದ ಪುತ್ತೂರು ಕಿಯೋನಿಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ದಿನೇಶ್ ಪ್ರಸನ್ನ, ಡಾ.ಕೃಷ್ಣಪ್ರಕಾಶ್, ಚಿತ್ರಕಲಾ ಶಿಕ್ಷಕರೂ ಪ್ರಗತಿಪರ ಕೃಷಿಕರೂ ಆಗಿರುವ ರಾಮ್ಪ್ರಸಾದ್, ಪುತ್ರಿಯರಾದ ಶೈಲಜಾ, ಕಲ್ಲಡ್ಕದ ವಿದ್ಯಾಶಂಕರಿ ಮತ್ತು ಅಳಿಯಂದಿರು, ಸೊಸೆಯಂದಿರನ್ನು ಅಗಲಿದ್ದಾರೆ.ಇವರ ಓರ್ವ ಸೊಸೆ ಉಮಾ ಡಿ ಪ್ರಸನ್ನ ಅವರು ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.